ರಾಮನಗರ: ಧರ್ಮಸ್ಥಳದಲ್ಲಿ ಅಸಹಜ ಸಾವು, ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರದ್ಧ ಕಿಡಿಕಾರಿದ್ದರು. ಎಸ್ಐಟಿ ರದ್ದು ಮಾಡುವಂತೆ ಒತ್ತಾಯಿಸಿದ್ದರು. ಇನ್ನು ಈ ಬಗ್ಗೆ ರಾಮನಗರದಲ್ಲಿ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ.
ಎಸ್ಐಟಿ ತನಿಖೆ ಮಾಡಲ್ಲ ಅನ್ನುತ್ತಿದ್ದ ಸಿದ್ದರಾಮಯ್ಯ ಅವರಿಗೆ ಎಸ್ಐಟಿ ರಚಿಸುವಂತೆ ಯಾವ ಶಕ್ತಿಗಳು, ಯಾವ ಸಂಘಟನೆಗಳು ಒತ್ತಡ ಹೇರಿತ್ತು ಎಂಬುದನ್ನು ಸದನದಲ್ಲಿ ಬಹಿರಂಗಪಡಿಸಬೇಕು. ಸರ್ಕಾರ ಧರ್ಮಸ್ಥಳ ತನಿಖೆಯ ಮಧ್ಯಂತರ ವರದಿಯನ್ನು ನೀಡಬೇಕು. ಆ ಮುಸುಕುಧಾರಿಯ ಹಿನ್ನೆಲೆ ಏನು, ಆತನ ಹಿಂದೆ ಯಾರಿದ್ದರೆ ಎಂಬುದು ಸಹ ತನಿಖೆಯಾಗಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷನಾಯಕ ಆರ್. ಅಶೋಕ್ ಕಿಡಿಕಾರಿದ್ದರು. ಈ ಬಗ್ಗೆ ಉಲ್ಲೇಖಿಸಿ ರಾಮಲಿಂಗಾರೆಡ್ಡಿಯವರು ಮಾತನಾಡಿದ್ದಾರೆ.
ನಾವು ಮಂಜುನಾಥ ಭಕ್ತರು
ಧರ್ಮಸ್ಥಳಕ್ಕೆ ಕಾಂಗ್ರೆಸ್ಸಿಗರೇ ಹೆಚ್ಚು ಹೋಗುತ್ತಾರೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕು . ಸ್ಪಷ್ಟನೆ ಸಿಕ್ಕರೆ ಅಪಪ್ರಚಾರ ತಪ್ಪುತ್ತದೆ. ಯೂಟ್ಯೂಬರ್ಗಳು ತಮಗೆ ತೋಚಿದಂತೆ ಮಾತನಾಡುತ್ತಾರೆ. ಮಂಜುನಾಥನ ಭಕ್ತರು ಬಿಜೆಪಿಯವರಿಗಿಂತ ಕಾಂಗ್ರೆಸ್ನವರೇ ಹೆಚ್ಚು. ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ಈ ವಿಷಯದಲ್ಲಿ ಎಳೆದು ತರಬಾರದು. ಧರ್ಮಸ್ಥಳದಲ್ಲಿ ಹೂತಿಟ್ಟ ಶವದ ಕುರುಹು ಏನೂ ಸಿಗದಿದ್ದರೆ ಅನಾಮಿಕ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬ್ಯಾನ್
ಇಂದಿನಿಂದ ಮುಜರಾಯಿ ದೇವಸ್ಥಾನ ವ್ಯಾಪ್ತಿಯ ಒಳಗೆ ಬ್ಯಾನ್ ಮಾಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡಬಾರದು. ದೇವಸ್ಥಾನದ ಆವರಣದ ಯಾವುದೇ ಒಳಭಾಗದಲ್ಲಿ, ಹೊರಭಾಗದಲ್ಲಿ ಪ್ಲಾಸ್ಟಿಕ್ ಬ್ಯಾನ್ ಅನ್ನ ರಾಜ್ಯಸರ್ಕಾರ ಹಾಗೂ ಜಿಲ್ಲಾಧಿಕಾರಿ ಮಾಡಬೇಕು. ಸ್ವಚ್ಛತೆ ಹಾಗೂ ಪರಿಸರವನ್ನ ಗಮನದಲ್ಲಿಕೊಂಡು ಬ್ಯಾನ್ ಮಾಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ರಾಮನಗರದಲ್ಲಿ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಧರ್ಮಸ್ಥಳದ ಚರ್ಚೆ
2012 ರಲ್ಲಿ ಸೌಜನ್ಯ ಕೊಲೆಯಾಯ್ತು. ಈ ಬಗ್ಗೆ CBI ಕೂಡ ತನಿಖೆ ಮಾಡಿ ವರದಿ ನೀಡಿದೆ. ಆದರೂ ನಮ್ಮ ಕೆಲವು ಹಿಂದೂಗಳು ಧರ್ಮಸ್ಥಳದ ವಿರುದ್ಧ ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಮುಸುಕುಧಾರಿ ಹೋಗಿ ಹೇಳಿದರಿಂದ ನ್ಯಾಯಾಧೀಶರು ತನಿಖೆಗೆ ಆದೇಶಿದರು. ಆದರೆ ಅಲ್ಲಿ ಏನು ಸಿಕ್ಕಿಲ್ಲ ಮುಂದೇನಾಗುತ್ತೋ ಕಾದು ನೋಡಬೇಕು. ಏನು ಸಿಗದೇ ಹೋದರೆ ಅನಾಮಿಕ ವ್ಯಕ್ತಿ ಮೇಲೆಯೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಾಜಿ ಸಚಿವ ರಾಜಣ್ಣ ಪರ ಪ್ರತಿಭಟನೆ
ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ಹಿನ್ನೆಲೆ, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ತುಮಕೂರಿನಲ್ಲಿ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಬಗ್ಗೆ ಮಾತನಾಡಿದ ಕೆಎನ್ ರಾಜಣ್ಣ, ಅವರ ಬೆಂಬಲಿಗರು ಮತ್ತೆ ಕೇಳುತ್ತಾರೆ ಅದರಲ್ಲಿ ತಪ್ಪಿಲ್ಲ. ಯಾವ ಕಾಂತ್ರಿನೂ ಇರಲ್ಲ. ಐದು ವರ್ಷ ನಮ್ಮದೇ ಸರ್ಕಾರ ಇರುತ್ತೆ. ಸಿದ್ದರಾಮಯ್ಯ ನವರು ಮುಂದುವರೆಯುತ್ತಾರೆ. ಏನೇ ಬದಲಾವಣೆ ಇದ್ದರು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ರಾಮನಗರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.














































