ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆ ಶಿವಕುಮಾರ್‌ ಹೊಸ ದಾಳ! ಒಂದಾಗ್ತಿವೆ ರಾಜ್ಯದ ಎರಡು ಮಹಾಶಕ್ತಿ, ನವೆಂಬರ್‌ ಕ್ರಾಂತಿಗೆ ವೇದಿಕೆ ರೆಡಿ!

Picture of Savistara

Savistara

Bureau Report

ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆ ಶಿವಕುಮಾರ್‌ ಹೊಸ ದಾಳ! ಒಂದಾಗ್ತಿವೆ ರಾಜ್ಯದ ಎರಡು ಮಹಾಶಕ್ತಿ, ನವೆಂಬರ್‌ ಕ್ರಾಂತಿಗೆ ವೇದಿಕೆ ರೆಡಿ!ಕರ್ನಾಟಕದಲ್ಲಿ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಶೀತಲ ಸಮರ ಸದ್ಯಕ್ಕೆ ಮುಗಿಯೋ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ದಿಲ್ಲಿ – ಬೆಂಗಳೂರಲ್ಲಿ ಬಹಳಷ್ಟು ಬೆಳವಣಿಗೆಗಳ ಬಳಿಕ ಸಿಎಂ ಬದಲಾವಣೆ ಕೂಗು ಸ್ವಲ್ಪ ತಣ್ಣಗಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್‌ಲ್ಲಿ ನವೆಂಬರ್‌ ಕ್ರಾಂತಿಗೆ ಸದ್ದಿಲ್ಲದೇ ವೇದಿಕೆ ನಿರ್ಮಾಣ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್‌ ಹೊಸ ದಾಳ ಉರುಳಿಸುತ್ತಿದ್ದಾರೆ. ಸರ್ಕಾರ ರಚನೆ ಸಮಯದಲ್ಲಿ ಆಗಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಂತೆ ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಅವರ ನಿಷ್ಠಾವಂತರು ಹೊಸ ರಾಜಕೀಯ ಸಮೀಕರಣಕ್ಕೆ ಮುಂದಾಗಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನವೆಂಬರ್‌ನಲ್ಲಿ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಡಿಕೆ ಶಿವಕುಮಾರ್‌ ಉರುಳಿಸುತ್ತಿರುವ ಹೊಸ ದಾಳಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕಕ್ಕಾಬಿಕ್ಕಿಯಾಗಿದ್ದು, ಯಾರ ಪರ ನಿಲ್ಲಬೇಕು ಎನ್ನುವ ಜಿಜ್ಞಾಸೆಯಲ್ಲಿ ಮುಳುಗಿದಂತೆ ಕಾಣುತ್ತಿದೆ.

[t4b-ticker]
error: Content is protected !!