ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ವಿಳಂಬ | ಶಿವಮೊಗ್ಗ ದಲ್ಲಿ ಹವಾಮಾನ,ಕಂದಾಯ, ತೋಟಗಾರಿಕೆ ಇಲಾಖೆ, ವಿಮೆ ಕಂಪನಿಗಳ ಜೊತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸಭೆ

Picture of Savistara

Savistara

Bureau Report

2024 – 25 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಹಣವು ರೈತರ ಖಾತೆಗಳಿಗೆ ಕಡಿಮೆ ಜಮಾ ಆಗಿದ್ದು,

ಕೆಲವು ರೈತರಿಗೆ ಪ್ರೀಮಿಯಂ ಮೊತ್ತವು ಸಹ ಬಂದಿರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದ್ದು, ಹವಾಮಾನ ಇಲಾಖೆ ತೋಟಗಾರಿಕಾ ಇಲಾಖೆ ಕಂದಾಯ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿಯ ಅಧಿಕಾರಿಗಳ ಜೊತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ,

ರೈತರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ, ತಪ್ಪಾಗಿರುವುದನ್ನು ಸರಿಪಡಿಸಿ ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು,

ಹಾಗೂ ಬೆಳೆ ವಿಮೆಯನ್ನು ಮರು ಜಮೆ ಮಾಡಲು ಸಭೆಯಲ್ಲಿ ತೀರ್ಮಾನವನ್ನು ಸಂಸದ ರಾಘವೇಂದ್ರ ಬಿ ವೈ ತೆಗೆದುಕೊಂಡರು.

[t4b-ticker]
error: Content is protected !!