ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೆ ಈಗ ವಿಜಯ್ ನೇತೃತ್ವದ ಟಿವಿಕೆ ಎಂಎಲ್ಎ ವಿಎಮ್ಎಸ್ ಮುಸ್ತಫಾ (TVK Mustafa on Sanatana Dharma) ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಮುಸ್ತಫಾ ಹೇಳಿದ್ದೇನು?
ಮಧುರೈ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ವಿಎಮ್ಎಸ್ ಮುಸ್ತಫಾ, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದು ಮಾತ್ರವಲ್ಲದೆ, ನಾನು ಪೆರಿಯಾರ್ ರಾಮಸ್ವಾಮಿ ಅಯ್ಯರ್ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಅನಿಯಾಯಿಯಾಗಿದ್ದು, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೆನೆಂದು ಹೇಳಿಕೆ ನೀಡಿದ್ದಾರೆ.
ಸ್ಟಾಲಿನ್ ಪುತ್ರ ಹೇಳಿದ್ದೇನು?
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಈ ಸನಾತನ ಎನ್ನುವುದು ಜನರನ್ನು ಒಡೆಯುತ್ತದೆ, ಹೀಗಾಗಿ ಇದನ್ನು ನಿರ್ಮೂಲನೆ ಮಾಡಬೇಕೆಂದು ತಿಮಿಳುನಾಡು ಸಂಸತ್ತಿನಲ್ಲಿ ಅವರು ಹೇಳಿದ್ದರು.
ಬಿಜೆಪಿಯಿಂದ ಭಾರಿ ವಿರೋಧ!
ಯುದಯನಿಧಿ ಸ್ಟಾಲಿನ್ ಹೇಳಿಕೆಗೆ ಹಾಗೂ ಟಿವಿಕೆ ಎಂಎಲ್ಎ ವಿಎಮ್ಎಸ್ ಮುಸ್ತಫಾ ಅವರ ಬೆಂಬಲಕ್ಕೆ, ಭಾರತೀಯ ಜನತಾ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಬಿಜೆಪಿ ನಾಯಕ ನಾರಾಯಣ ತಿರುಪತಿ, ಮುಸ್ತಫಾ ಈ ರೀತಿಯ ಹೇಳಿಕೆಯನ್ನು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿಕೊಂಡು ಹೇಳು, ಅದನ್ನು ಬಿಟ್ಟು ಕೇವಲ ಹಿಂದೂ ಧರ್ಮವನ್ನು ಗುರಿ ಮಾಡುವುದು ತಪ್ಪು, ಇವನು ಸನಾತನಿಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾನೆಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಾಗೆಯೇ ಇತರ ಬಿಜೆಪಿ ನಾಯಕರು, ಉದಯನಿಧಿ ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿದಾಗ ಸಿಎಂ ವಿಜಯ್ ಏಕೆ ಮೌನ ವಹಿಸಿದ್ದರು? ಯಾಕೆ ಇವರಿಗೆ ಹಿಂದೂಗಳು ಮತ ಹಾಕಿಲ್ಲವೆ? ಈಗ ಇವರ ಪಕ್ಷದ ಎಂಎಲ್ಎ ಸಹ ಇದೇ ಕೆಲಸವನ್ನು ಮಾಡಿದ್ದಾನೆ. ವಿಜಯ್ ಏನು ಕ್ರಮ ತೆಗದುಕೊಳ್ಳುತ್ತಾನೆಂದು ನೋಡೊಣ ಎಂದು ಹೇಳಿದ್ದಾರೆ,













































