ಸುಳ್ಯ:ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ವತಿಯಿಂದ ಶತಾಬ್ದಿ ವರ್ಷದ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ಸಾವಿರಾರು ಸ್ವಯಂ ಸೇವಕರಿಂದ ಪಥಸಂಚಲನ ನಡೆಯಿತು.

ಜ್ಯೋತಿ ವೃತ್ತದಿಂದ ಗಾಂಧಿನಗರ ನಂತರ ರಥಬೀದಿಯಾಗಿ ಸಾಗಿ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಸಂಪನ್ನಗೊಂಡಿತ್ತು.ಈ ವೇಳೆ ಅರೆಸೆಸ್ ಪ್ರಾಂತ್ಯ ಸಹ ಸೇವಾ ಪ್ರಮುಖ ನ. ಸೀತಾರಾಮ್, ಚಂದ್ರಶೇಖರ ತಳೂರು,ವಿಭಾಗ ಸಹ ಕಾರ್ಯವಾಹ ಸುಭಾಷ್ ಕಳಂಜ, ಪ್ರಮುಖರಾದ ಡಾ. ಮನೋಜ್ ಅಡ್ಡಂತಡ್ಕ, ಪ್ರದುಮ್ನ ಉಬರಡ್ಕ,ರೋಹಿತ್,ಕಿಶನ್ ದೇವರಗುಂಡ,ಜಯಂತ ಶೇಟ್,ಹೇಮಚಂದ್ರ ಮೇರ್ಕಜೆ,ಸುರೇಶ ಆರಂಬೂರು,ಶರವಣ, ಮನೋಜ್ ಸುಬ್ರಮಣ್ಯ, ಹಿರಿಯ ಕಾರ್ಯಕರ್ತರು,ಪ್ರಮುಖರು ಉಪಸ್ಥಿತರಿದ್ದರು.













































